KCF UAE
Click Me to Share on Whatsappವಿಶ್ವ ಪ್ರಾರ್ಥನಾ ದಿನ
ಭಾರತದಿಂದ ಗ್ರಾಂಡ್ ಮುಫ್ತಿ ಶೈಖ್ ಅಬೂಬಕರ್ ಅಹ್ಮದ್ .ಕೋವಿಡ್ ಮಹಾ ಮಾರಿಯಿಂದ ಮುಕ್ತಿ ಹೊಂದಲು ವಿಶ್ವ ಸಂಸ್ಥೆಯೊಂದಿಗೆ ಕೈ ಜೋಡಿಸಿ ಯು ಎ ಇ ಯ ಪ್ರಮುಖ ಸಾಂಸ್ಕೃತಿಕ ಯೋಜನಾ ಸಂಸ್ಥೆಯಾದ ಹ್ಯೂಮನ್ ಫ್ರಟೆರ್ನಿಟಿ ಸಂಸ್ಥೆಯು ವಿಶ್ವ ಪ್ರಾರ್ಥನಾ ಸಮ್ಮೇಳನವು ಇಂದು ಗುರುವಾರ ನಡೆಯಲಿದೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಈ ಕುರಿತು ಪ್ರತ್ಯೇಕ ಕಾರ್ಯಕ್ರಮ ನಡೆಯಲಿದೆ .
ಭಾರತದಿಂದ ಇಂಡಿಯನ್ ಗ್ರಾಂಡ್ ಮುಫ್ತಿ ಎ ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ .
ಕೋವಿಡ್ ಮಹಾಮಾರಿಯಿಂದ ಮುಕ್ತಿಹೊಂದಲು ವಿಜ್ಞಾನಿಗಳು , ವಿಶ್ವ ಅರೋಗ್ಯ ಸಂಸ್ಥೆ ,ಹಾಗು ವಿಶ್ವದ ಹಲವಾರು ಸಂಘ ಸಂಸ್ಥೆಗಳು ನಡೆಸುವ ಹೋರಾಟಕೆ ಬೆಂಬಲ ಮತ್ತು ಶೀಘ್ರ ಫಲ ಕಾಣಲು ಪ್ರಾರ್ಥನೆಯಿಂದ ಸಾಧ್ಯ ಎಂದು ವಿಶ್ವ ಸಂಸ್ಥೆಯ ಸೆಕ್ರಟರಿ ಜೆನರಲ್ ಅಂಟೋನಿಯೋ ಗುಟಾರಸ್ ತಿಳುಸಿದರು . ಶೈಖುಲ್ ಅಝ್ಹರ್ ಶೈಖ್ ಅಹ್ಮದುಲ್ ತ್ವಯಿಬ್ ಮತ್ತು ಪೋಪ್ ಫ್ರಾಸಿಸ್ , ವಿವಿಧ ಅರಬ್ ರಾಜ್ಯ ಮತ್ತು ಯುರೋಪ್ ರಾಷ್ಟ್ರಗಳ ಮುಖಂಡರುಗಳು ಪ್ರಾರ್ಥನಾ ದಿನಕ್ಕೆ ಬೆಂಬಲ ಸೂಚಿಸಿದ್ದಾರೆ .
ಯು ಎ ಇ ಯ ಹ್ಯೂಮೆನ್ ಫ್ರಟೆರ್ನಿಟಿ ಸಂಸ್ಥೆಯ ಅಪೇಕ್ಷೆಯಮೇರೆಗೆ ಇಂಡಿಯನ್ ಗ್ರಾಂಡ್ ಮುಫ್ತಿ ಎ ಪಿ ಉಸ್ತಾದರು ಇಂದು ಮದ್ಯಾಹ್ನ 12 ಗಂಟೆಗೆ ಆನ್ಲೈನ್ ಮೂಲಕ ನಡೆಸುವ ಪ್ರಾರ್ಥನಾ ಸಂಘಮದಲ್ಲಿ ಸಾವಿರಾರು ಮಂದಿ ವೀಕ್ಷಿಸಲಿದ್ದಾರೆ
https:www.youtube.com/sheikhaboobacker
ಎಂಬ ಯೂಟ್ಯೂಬ್ ಚಾನೆಲ್ ಮೂಲಕ
ಭಾರತೀಯ ಸಮಯ 12 ಗಂಟೆಗೆ ವೀಕ್ಷಿಸಬಹುದು .