Latest News

ಕೊರೊನಾವೈರಸ್

User 04/02/2020-11:16:59am Technology

ಕೊರೊನಾವೈರಸ್ ರೋಗ ಚೀನಾದ ಜನಜೀವನವನ್ನು ನರಕ ಸದೃಶ

ಬೀಜಿಂಗ್: ಕೊರೊನಾವೈರಸ್ ರೋಗ ಚೀನಾದ ಜನಜೀವನವನ್ನು ನರಕ ಸದೃಶ ಮಾಡಿದ್ದು, ಈ ಮಹಾಮಾರಿಗೆ ಸತ್ತವರ ಸಂಖ್ಯೆ ಅಂದು ಸಾರ್ಸ್ ರೋಗಕ್ಕೆ ಬಲಿಯಾದವರ ಸಂಖ್ಯೆಯನ್ನೂ ಮೀರಿಸಿದೆ. ಒಟ್ಟು 450 ಕ್ಕೂ ಅಧಿಕ ಮಂದಿ ಈಗಾಗಲೇ ಈ ಮಹಾಮಾರಿ ವೈರಸ್ ಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಾವಿರಾರು ಜನ ಸೋಂಕಿಗೆ ತುತ್ತಾಗಿದ್ದು, ಹೊಸದಾಗಿ 56 ಮಂದಿಗೆ ತಗುಲಿದೆ.ಚೀನಾದಲ್ಲಿ ಸಾರ್ಸ್ ರೋಗವನ್ನೂ ಮೀರಿಸಿದ ಕೊರೊನಾವೈರಸ್ ಭಾರತದಲ್ಲೂ ಈ ರೋಗ ಪತ್ತೆಯಾಗಿದ್ದು ಕೇರಳದಲ್ಲಿ ಇದುವರೆಗೆ ಮೂರು ಪ್ರಕರಣಗಳು ವರದಿಯಾಗಿವೆ. ತ್ರಿಶ್ಶೂರ್ ನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಮೊದಲ ಬಾರಿಗೆ ಕೊರೊನಾವೈರಸ್ ತಗುಲಿದ ವರದಿಯಾಗಿತ್ತು. ಇದೀಗ ಆಲಪ್ಪುಳದಲ್ಲಿ ಇನ್ನೊಬ್ಬ ವ್ಯಕ್ತಿಗೆ ಸೋಂಕು ತಗುಲಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಡಗಿನಲ್ಲೂ ಕಟ್ಟೆಚ್ಚರ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಕೊಡಗು ಜಿಲ್ಲೆಯಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈಗಾಗಲೇ ಕ್ಷಿಪ್ರ ಕಾರ್ಯಪಡೆ ರಚಿಸಲಾಗಿದೆ. ಕೇರಳ ಕಾರ್ಮಿಕರ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಮುಂದಿನ 15 ದಿನಗಳವರೆಗೆ ನಿರ್ಬಂಧ ವಿಧಿಸಲಾಗಿದೆ. ತೋಟದ ಮಾಲೀಕರಿಗೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಪ್ರವಾಸಿ ತಾಣಗಳಲ್ಲಿ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಭಿತ್ತಿ ಪತ್ರಗಳನ್ನು ವಿತರಿಸಿ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೊಡಗು ಜಿಲ್ಲಾಸ್ಪತ್ರೆಯಲ್ಲಿ 5 ಹಾಸಿಯ ವಿಶೇಷ ವಾರ್ಡ್ ತೆರೆಯಲಾಗಿದೆ. ಸೋಮವಾರಪೇಟೆ, ವಿರಾಜಪೇಟೆಗಳಲ್ಲೂ ವಿಶೇಷ ವಾರ್ಡ್ ತೆರೆಯಲಾಗಿದೆ.
Click Me to Share on Whatsapp

Related Post