Latest News

Attention 2020

User 25/02/2020-11:28:48am Technology

ಅಲ್ ಬರ್ಷ ದಲ್ಲಿ ಚಿಮ್ಮಿದ ಹರುಷ  ಇಶಾರ ಅಭಿಯಾನಕ್ಕೆ ದುಬೈ ಸೌತ್ ಝೋನ್ ನಲ್ಲಿ ಯಶಸ್ವೀ ಚಾಲನೆ

Attention 2020  - ಅಲ್ ಬರ್ಷ ದಲ್ಲಿ ಚಿಮ್ಮಿದ ಹರುಷ 
ಇಶಾರ ಅಭಿಯಾನಕ್ಕೆ ದುಬೈ ಸೌತ್ ಝೋನ್ ನಲ್ಲಿ ಯಶಸ್ವೀ ಚಾಲನೆ 

KCF UAE  ರಾಷ್ಟ್ರ ಮಟ್ಟದ ವತಿಯಿಂದ  ಯುವ ಕಾರ್ಯಕರ್ತರನ್ನು ಆಕರ್ಷಿಸಲು Attention 2020 ಎಂಬ ಹೆಸರಿನಲ್ಲಿ ವಿಶೇಷ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿತ್ತು. ಈ ಆಟೋಟ ಸ್ಪರ್ಧಾ ಕಾರ್ಯಕ್ರಮಗಳಿಗೆ ಇತ್ತೀಚೆಗೆ ದುಬೈ ಸೌತ್ ಝೋನ್ ನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ದಿನಾಂಕ 21/02/2020 ರಂದು ಬೆಳಿಗ್ಗೆ  8 ಘಂಟೆಗೆ ಆರಂಭಗೊಂಡ ಆಟೋಟ ಸ್ಪರ್ಧೆಗಳು ಮುಸ್ಸಂಜೆ 8 ಘಂಟೆಯ ವರೆಗೂ ನಡೆದು ನಂತರ ಬಹುಮಾನ ನೀಡುವ ವರೆಗೂ ಹೆಚ್ಚಿನ ಯುವ ಕಾರ್ಯಕರ್ತರು ಪಾಲ್ಗೊಂಡಿದ್ದು ಎಲ್ಲರಿಗೂ ಮಾದರಿಯಾಗಿತ್ತು. 
ಆಟೋಟ ಸ್ಪರ್ಧೆಗಳಲ್ಲಿ ಮುಖ್ಯವಾಗಿ ಕ್ರಿಕೆಟ್, ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳು ಅತ್ಯಂತ ಸ್ಪರ್ಧಾತ್ಮಕ ಮತ್ತು ಆಸಕ್ತಿದಾಯಕವಾಗಿತ್ತು. ಮೊದಲೇ ಅಯೋಜಕರು ತೀರ್ಮಾನಿಸಿದಂತೆ ಹೆಚ್ಚಿನ ಆಟೋಟ ಸ್ಪರ್ಧೆಗಳು ಅಲ್ ಬರ್ಷ ಪಾರ್ಕ್ ನಲ್ಲಿ ಅತ್ಯಂತ ಸುವ್ಯಸ್ಥಿತವಾಗಿ ನಡೆಯಿತು. ಇದರ ಮಧ್ಯೆ ಮಧ್ಯಾಹ್ನ 3 ಘಂಟೆಗೆ ಸರಿಯಾಗಿ ಹೆಮ್ಮೆಯ ಗಲ್ಫ್ ಕನ್ನಡ ಮಾಸಿಕ ಗಲ್ಫ್ ಇಶಾರ ಚಂದಾ ಅಭಿಯಾನಕ್ಕೆ ದುಬೈ ಸೌತ್ ಝೋನ್ ನಲ್ಲಿ ವಿಧ್ಯುಕ್ತ ಚಾಲನೆ ನೀಡಲಾಯಿತು.

ಅಲ್ ಕೂಝ್ ನ ಅಲ್ ಬರ್ಷ ಪಾರ್ಕ್ ನಲ್ಲಿ ಇಲ್ಯಾಸ್ ಮದನಿ ಯವರ ನೇತೃತ್ವದಲ್ಲಿ ಎಲ್ಲದಕ್ಕೂ ಉತ್ತಮ ವ್ಯವಸ್ಥೆಮಾಡಲಾಗಿತ್ತು. ಅಝೀಝ್ ಅಹ್ಸನಿ ಯವರ ನೇತೃತ್ವದಲ್ಲಿ 4 ಸೆಕ್ಟರ್ ಗಳೂ ಭರ್ಜರಿ ಭೋಜನ ಮತ್ತು ಎಲ್ಲ ಕಾರ್ಯಕ್ರಮಗಳಿಗೆ ಆರಂಭದಿಂದ ಸಂಜೆಯವರೆಗೆ ಕೈಜೋಡಿಸಿದ್ದು ಕಾರ್ಯಕ್ರಮ ಯಶಸ್ವಿಗೆ ಕಾರಣವಾಯಿತು. 4 ಸೆಕ್ಟರ್ ಗಳ ನಡುವೆ ನಡೆದ ಜಿದ್ದಾ ಜಿದ್ದಿ ಸ್ಪರ್ಧೆಯಲ್ಲಿ ಕೊನೆಗೂ ಅಲ್ ಕೂಝ್  ಸೆಕ್ಟರ್ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಕೊನೆಯಲ್ಲಿ ರಾಷ್ಟ್ರೀಯ ನಾಯಕರಾದ ರಝಖ್ ಹಾಜಿ, ಜಮಾಲುದ್ದೀನ್ PRO , ಇಕ್ಬಾಲ್ ಕಾಜೂರು, ಶಾಹುಲ್ ಹಮೀದ್ ಸಖಾಫಿ, ರಫೀಕ್ ಕಲ್ಲಡ್ಕ ರವರ ಉಪಸ್ಥಿತಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಸಲಾಯಿತು.
ಕಾರ್ಯಕ್ರಮದ ಆಯೋಜಕರಾಗಿ ರಫೀಕ್ ಜೆಪ್ಪು ಮತ್ತು ಷರೀಫ್ DK  ರವರು ಸಹಕರಿಸಿದರು. ಇಶಾರ ಅಭಿಯಾನದ ಚಾಲನೆಯನ್ನು ಅಬುಧಾಬಿ ಝೋನ್ ಅಧ್ಯಕ್ಷ ಹಸೈನಾರ್ ಅಮಾನಿ ನಿರ್ವಹಿಸಿದ್ದು ಅವರ ಆಧ್ಯಾತ್ಮಿಕ ಉಪದೇಶಗಳು KCF ಕಾರ್ಯಕರ್ತರಿಗೆ ಮನಮುಟ್ಟುವಂತಿತ್ತು.ಇಶಾರ ಕಾರ್ಯಕ್ರಮವನ್ನು ರಹ್ಮಾನ್ ಉಳ್ಳಾಲ ಮತ್ತು ಮನ್ಸೂರ್ ಹರೇಕಳ ನಡೆಸಿಕೊಟ್ಟು ನವಾಜ್ ಹಾಜಿ ಕೋಟೆಕಾರ್, ಸಮದ್ ಬೀರಾಳಿ ಆಟೋಟ ಸ್ಪರ್ಧೆಗಳ ತೀರ್ಪುಗಾರರಾಗಿ ಸಹಕರಿಸಿದರು.

                                                                           PHOTO GALLERY

      

Click Me to Share on Whatsapp

Related Post